09 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
09 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1. ಸಾಮಾನ್ಯವಾಗಿ ಫೆಬ್ರವರಿಯಿಂದ ಮೇ ತಿಂಗಳವರೆಗೆ ನಡೆಯುವ ಸಂಸತ್ ಅಧಿವೇಶನವು
ಎ) ಮಾನ್ಸೂನ್ ಅಧಿವೇಶನ
ಬಿ) ಚಳಿಗಾಲದ ಅಧಿವೇಶನ
ಸಿ) ಮುಂಗಡ ಪತ್ರದ ಅಧಿವೇಶನ
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: ಸಿ) ಮುಂಗಡ ಪತ್ರದ ಅಧಿವೇಶನ
2. ಭಾರತದ ರಾಷ್ಟ್ರಪತಿಯವರಿಗೆ ಯಾರು ಪ್ರಮಾಣ ವಚನವನ್ನು ಬೋಧಿಸುತ್ತಾರೆ ?
ಎ) ಭಾರತದ ಮುಖ್ಯ ನ್ಯಾಯಮೂರ್ತಿ
ಬಿ) ರಾಜ್ಯಪಾಲರು
ಸಿ) ಪ್ರಧಾನಮಂತ್ರಿ
ಡಿ) ಹಿಂದಿನ ರಾಷ್ಟ್ರಪತಿ
ಸರಿಯಾದ ಉತ್ತರ: ಎ) ಭಾರತದ ಮುಖ್ಯ ನ್ಯಾಯಮೂರ್ತಿ
3. ಭಾರತದ ರಾಷ್ಟ್ರಪತಿಯವರು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಯಾರಿಗೆ ಸಲ್ಲಿಸುತ್ತಾರೆ ?
ಎ) ಭಾರತದ ಮುಖ್ಯ ನ್ಯಾಯಾಧೀಶರು
ಬಿ) ಪ್ರಧಾನ ಮಂತ್ರಿ
ಸಿ) ಉಪರಾಷ್ಟ್ರಪತಿ
ಡಿ) ಸ್ಪೀಕರ್
ಸರಿಯಾದ ಉತ್ತರ: ಸಿ) ಉಪರಾಷ್ಟ್ರಪತಿ
4. 1976 ರ 42 ನೇ ಸಂವಿಧಾನ ತಿದ್ದುಪಡಿಯಲ್ಲಿ ಯಾವ ಪದವನ್ನು ಸೇರಿಸಲಾಗಿದೆ ?
ಎ) ಜಾತ್ಯತೀತತೆ
ಬಿ) ಸಮಾಜವಾದಿ
ಸಿ)ಐಕ್ಯತೆ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ
5. ಚಿತ್ರದುರ್ಗದಲ್ಲಿನ ಬ್ರಹ್ಮಗಿರಿ ಶಾಸನವು ಯಾವ ಸಾಮ್ರಾಟನ ಆಳ್ವಿಕೆಗೆ ಸೇರಿದ್ದು ?
ಎ) ಕದಂಬ
ಸಿ) ಅಮೋಘವರ್ಷ
ಬಿ) ಅಶೋಕ
ಡಿ) ಪುಲಿಕೇಶಿ
ಸರಿಯಾದ ಉತ್ತರ: ಬಿ) ಅಶೋಕ
6. ಈ ಕೆಳಗಿನ ಯಾವುದು ಕನ್ನಡ ಸಾಹಿತ್ಯ ಲೋಕದ ರತ್ನತ್ರಯರನ್ನು ಸರಿಯಾಗಿ ಪ್ರತಿನಿಧಿಸಿದೆ ?
ಎ) ಪಂಪ , ರನ್ನ , ಹರಿಹರ
ಸಿ) ರನ್ನ , ಜನ್ನ , ಪೊನ್ನ
ಬಿ) ಪಂಪ , ಹರಿಹರ , ಜನ್ಮ
ಡಿ) ಪಂಪ , ರನ್ನ , ಪೊನ್ನ
ಸರಿಯಾದ ಉತ್ತರ: ಡಿ) ಪಂಪ , ರನ್ನ , ಪೊನ್ನ
7. ಭಾರತ ಸಂವಿಧಾನದ ಯಾವ ಅನುಚ್ಛೇದ “ ಜೀವನದ ಹಕ್ಕಿನ ” ಬಗ್ಗೆ ತಿಳಿಸುತ್ತದೆ ?
ಎ) ಆರ್ಟಿಕಲ್ 22
ಬಿ) ಆರ್ಟಿಕಲ್ 25
ಸಿ) ಆರ್ಟಿಕಲ್ 21
ಡಿ) ಆರ್ಟಿಕಲ್ 32
ಸರಿಯಾದ ಉತ್ತರ: ಸಿ) ಆರ್ಟಿಕಲ್ 21
8. ಮೂಲಭೂತ ಕರ್ತವ್ಯಗಳನ್ನು ಇಲ್ಲಿ ಸೇರಿಸಿದೆ
ಎ) ಅನುಚ್ಛೇದ 57
ಬಿ) ಅನುಚ್ಛೇದ 46
ಸಿ) ಅನುಚ್ಛೇದ 51 A
ಡಿ) ಅನುಚ್ಛೇದ 350
ಸರಿಯಾದ ಉತ್ತರ: ಸಿ) ಅನುಚ್ಛೇದ 51 A
9. ಈ ಕೆಳಕಂಡವುಗಳಲ್ಲಿ ಯಾವುದು ಭಾರತ ಸಂವಿಧಾನದ ಪ್ರಮುಖವಾದ ಲಕ್ಷಣವಾಗಿರುವುದಿಲ್ಲ ?
ಎ) ನಮ್ಯತೆಯ ಕಠಿಣ ಸಂಯೋಜನೆ
ಬಿ) ಉದ್ದವಾದ ಲಿಖಿತ ಸಂವಿಧಾನ
ಸಿ) ಒಕ್ಕೂಟ ವ್ಯವಸ್ಥೆ
ಡಿ) ನ್ಯಾಯಾಂಗದ ಅವಲಂಬನೆ
ಸರಿಯಾದ ಉತ್ತರ: ಡಿ) ನ್ಯಾಯಾಂಗದ ಅವಲಂಬನೆ
10. ಜಾನಪದ ನೃತ್ಯ ತಮಾಷಾ ಮುಖ್ಯವಾಗಿ ಇರುವುದು
ಎ) ಮಹಾರಾಷ್ಟ್ರ
ಬಿ) ಹಿಮಾಚಲ ಪ್ರದೇಶ
ಸಿ) ರಾಜಸ್ಥಾನ
ಡಿ) ಗುಜರಾತ್
ಸರಿಯಾದ ಉತ್ತರ: ಎ) ಮಹಾರಾಷ್ಟ್ರ